ಕಥೆ, ಕವನ .. ವಿಭಾಗ – ಫೆಬ್ರವರಿ 2026
ಅಜ್ಜಿಮನೆ – ಭಾಗ 3
ಅಂದು ಭಾನುವಾರ, ಹುಡುಗರಿಗೆ ಬಹಳ ಸಂತಸ. ಏಕೆಂದರೆ ತಾತನವರು ದೂರದ ದೊಡ್ಡ ತೋಟಕ್ಕೆ ಅವರನ್ನು ಕರೆದುಕೊಂಡು ಹೋಗುವವರಿದ್ದರು . ಅದು ನಡಿಗೆ ದೂರವಾದ್ದರಿಂದ ಹಾಗೂ ತೋಟವು ದೊಡ್ಡದಿದ್ದರೆ ಎತ್ತಿನ ಬಂಡಿಯನ್ನು ವ್ಯವಸ್ಥೆ ಮಾಡಿದ್ದರು
ಎತ್ತಿನ ಬಂಡಿ ಬಂದು ಮನೆ ಮುಂದೆ ನಿಂತಾಗ ಹುಡುಗರಿಗೆ ಸಂಭ್ರಮವೋ ಸಂಭ್ರಮ.
ತುಂಟ ಸೀನ, ಅದನ್ನು ಧಡಾರನೆ ಹತ್ತಲು ಹೋದಾಗ, ಬಂಡಿ ಹಿಂದಕ್ಕೆ ವಾಲಿತು.
ತಾತ ಹೇಳಿದರು:ಅದನ್ನು ಹತ್ತುವುದು ಹಾಗಲ್ಲ.
ಅದನ್ನು ಹೇಗೆ ಹತ್ತುವುದೆಂದು ಕೊನೆಗೂ ತಿಳಿದು, ಒಬ್ಬೊಬ್ಬರಾಗಿ ಹತ್ತಿದರು. ತಾತ ಅದರಲ್ಲಿ ಕೂತಾಗ ಬಂಡಿಯವನು ಅದನ್ನು ಹೊಡೆದುಕೊಂಡು ಹೋಗುವುದಕ್ಕೆ ಮುಂದಾದನು. ಹುಡುಗರು ಅಜ್ಜಿ ಬರುವುದಿಲ್ಲವೇ ಎಂದರು.
ಅಜ್ಜಿ, ಮನೆಯಲ್ಲಿ ಅಡುಗೆ ಮಾಡಿ ನೀವು, ಬರುವ ವೇಳೆಗೆ ಊಟವನ್ನು ತಯಾರು ಮಾಡಬೇಡವೇ ? ಅದಕ್ಕೇ ಅಜ್ಜಿ ಬರುವುದಿಲ್ಲ ಎಂದು ತಾತ ಹೇಳಿದರು.

ಬಂಡಿಯಲ್ಲಿ ಸಾಗುತ್ತಿದ್ದಾಗ ಹುಡುಗರಿಗೆ ಏನೋ ಬಹಳ ದೊಡ್ಡ ವಿಮಾನದಲ್ಲಿ ಹೋಗುವಷ್ಟು ಖುಷಿಪಡುತ್ತಿದ್ದರು. ಅದು ಆಗಾಗ ದಡ ದಡ ಅಲ್ಲಾಡಿದರೂ ಅವರಿಗೆ ಏನೋ ಸಂಭ್ರಮ ಮತ್ತು ಖುಷಿ. ಹೊಲದ ಮಣ್ಣುಗಳಲ್ಲಿ ಅದು ಹೋಗುವಾಗ ಅವರಿಗೆ ಆಶ್ಚರ್ಯ. ಕೊನೆಗೂ ತಾತನ ಹೊಲ ತಲುಪಿ ಎಲ್ಲರೂ ಇಳಿದರು.
ಮಕ್ಕಳು ಬಂಡಿಯ ಬಗ್ಗೆ ಅತ್ಯಂತ ಉತ್ಸಾಹದಿಂದ ಹೊಗಳಿದ್ದನ್ನು ನೋಡಿ ತಾತನವರು ಕೇಳಿದರು ಊರಿನಲ್ಲಿ ನಿಮ್ಮ ಬಳಿ ಅಷ್ಟು ಚೆನ್ನಾಗಿರುವ ಕಾರಿನಲ್ಲಿ ಹೋಗುವುದಕ್ಕಿಂತ ನಿಮಗೆ ಇದು ಮಜವೇ?ಎಂದು ಕೇಳಿದಾಗ,ಹುಡುಗರು ಆ ಕಾರಿನಲ್ಲಿ ಹೋಗುವ ಮಜವೇ ಬೇರೆ, ಬಂಡಿಯಲ್ಲಿ ಹೋಗುವ ಮಜವೇ ಬೇರೆ ಎಂದು ಹೇಳಿದರು.
ಆ ದೊಡ್ಡ ಹೊಲದಲ್ಲಿ ಅನೇಕ ರೀತಿಯ ಹೂ ಗಿಡಗಳು, ತರಕಾರಿ ಗಿಡಗಳನ್ನು ತಾತನವರು ಮಕ್ಕಳಿಗೆ ಪರಿಚಯಿಸಿದರು. ನಂತರ ಅಲ್ಲಿಯೇ ಇದ್ದ ಇನ್ನೊಂದು ಮಾವಿನ ತೋಟಕ್ಕೆ ಮತ್ತೆ ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಹೋದರು.
ಅಲ್ಲಿ ಹುಡುಗರಿಗೆ ಅನೇಕ ಮಾವನ ಹಣ್ಣುಗಳನ್ನು ನೀಡಲಾಯಿತು.ಅವರು ಅಲ್ಲಿಯೇ ಅದನ್ನು ತೊಳೆದು ಕಚ್ಚಿ ತಿಂದರು.
ನಂತರ ಈ ವಾಟೆಯನ್ನು ಹಾಕುವುದು ಹೇಗೆ
ಇದರಿಂದ ಗಿಡ ಹೇಗೆ ಬರುತ್ತದೆ ?
ಅದು ಎಷ್ಟು ವರ್ಷಕ್ಕೆ ಮರವಾಗಿ ಹಣ್ಣು ಬಿಡುತ್ತದೆ?
ಒಂದು ವರ್ಷಕ್ಕೆ ಎಷ್ಟು ಹಣ್ಣು ಬಿಡುತ್ತದೆ ?ಎಂದು ಅನೇಕ ಪ್ರಶ್ನೆಗಳ ಸುರಿಮಳೆಗೆ ತಾತನವರು ಹಾಗೂ ಅಲ್ಲಿದ್ದ ರೈತರು ಸುಧೀರ್ಘವಾಗಿ ಸಮಾಧಾನದಿಂದ ಮಕ್ಕಳಿಗೆ ಅರ್ಥವಾಗುವಂತೆ ಎಲ್ಲವನ್ನು ತೋರಿಸಿ ವಿವರಿಸಿದರು.

ಹುಡುಗರು ಮತ್ತೆ ಬಂಡಿ ಹತ್ತಿ ಮನೆಗೆ ಬಂದು ಎಲ್ಲವನ್ನು ಅಜ್ಜಿಗೆ ಹೇಳಿದರು.
ಅವರು ತಮ್ಮ ತಂದೆ ತಾಯಿಗಳಿಗೆ ಈ ವಿಚಾರವನ್ನು ತಿಳಿಸಬೇಕೆಂದು ತಾತನ ಫೋನಿನಲ್ಲಿ ಅವರಿಗೆ ಕರೆ ಮಾಡಿ ಒಬ್ಬೊಬ್ಬರಾಗಿ ಎಲ್ಲರೂ ಎಲ್ಲ ವಿಚಾರವನ್ನು ತಿಳಿಸುತ್ತಾ ಬಂಡಿಯಲ್ಲಿ ಹೋಗುವ ಮಜವೇ ಮಜ ಎಂದು ಹೇಳಿದರು.
<–ಮುಖ ಪುಟಕ್ಕೆ ವಾಪಸ್

0 Comments